ನಿಮ್ಮ ಲಕ್ಷ ಅಥವ ಗುರಿ ಮತ್ತು ನೀವು ಮಾಡುವ ಕಾರ್ಯಗಳಲ್ಲಿ ಸಂಭಂದವಿರಲಿ. ಅಸಂಬದ್ಧ ಕಾರ್ಯ ಅಸಾಧಾರಣ ಗುರಿ ಇದ್ದರೆ ಯಾವ ಪ್ರಯೋಜನವೂ ಆಗುವುದಿಲ್ಲ. ಇದು ಕೃಷ್ಣನ ಕರ್ಮಯೋಗಕ್ಕೆ ನಮ್ಮನ್ನು ಸ್ವಲ್ಪ ಮಟ್ಟಿಗಾದರೂ ಅಳವಡಿಸಿಕೊಳ್ಳಬೋಹುದಾದ ಜ್ಞಾನಕ್ಕೆ ಒಂದು ಸೋಪಾನ. ನನಗೆ ಹಿಂದಿ ರಾಜಕಪೂರ್ ಚಿತ್ರದ ನಾದಾನೇ ಜೋ ಬೈಟ್ ಕಿನಾರೆ ಪೂಚೆ ರಾಹ್ ವ ತ ನು ಕಿ ನೆನಪಿಗೆ ಬರುತ್ತದೆ.ಅರ್ಥಾತ್ ಸುಮ್ಮನೆ ವಿಳಾಸಗಳನ್ನು ತೆಳೆದುಕೊಂಡು ಏನು ಪ್ರಯೋಜನ ತೆಳೆದ ವಿಳಾಸಗಳಿಗೂ ಸ್ವಲ್ಪ ಹೋಗಿ ಮೈತ್ರಿ ಭಾವನೆಯನ್ನು ಮೂಡಿಸು. ಬರಿಯ ಸುದ್ದಿ ತಿಳಿಯುವಿಕೆ ಜ್ಞಾನವಲ್ಲ. ಇದು ಜ್ಞಾನಕ್ಕೆ ನಿನ್ನನ್ನು ಕರೆದೊಯ್ಯಲು ಒಂದು ಮಾರ್ಗ ಅಷ್ಟೇ. ಸುದ್ದಿ ಮತ್ತು ವಸ್ತು ತಿಳುವಳಿಕೆ ಎಷ್ಟು ಪ್ರಮಾಣದಲ್ಲಿ ಬೇಕು ಹಾಗು ನಮ್ಮ ಗುರಿಗೆ ಇದು ಎಷ್ಟು ಪ್ರಯೋಜನಕಾರಿ ಎನ್ನುವುದರ ಅರಿವೇ ವಿವೇಕ. ಈ ಹುಡುಗ ಬೆಂಗಳೂರು ರೈಲ್ವೆ ಸ್ಟೇಷನಲ್ಲಿ ನಿಂತು ಸ್ಟೇಷನ್ ಮಾಸ್ಟರ್ ನನ್ನ ಬರುವ ಹೋಗುವ ರೈಲುಗಳೆಲ್ಲ ಎಲ್ಲಿ ಹೋಗುತ್ತವೆ ಬರುತ್ತವೆ ಎಂದು ಕೇಳುತಿದ್ದನಂತೆ. ಬೇಸತ್ತ ಸ್ಟೇಷನ್ ಮಾಸ್ಟರ್ ನಿನಗೆ ಇಲ್ಲಿ ಹೊಗಬೇಕು ಮರಿ ಎಂದು ಕೇಳಿದರೆ ನಾನು ಹಳಿ ದಾಟಬೇಕು ಎಂದನಂತೆ. ಹಾಗಾಯಿತು ನಮ್ಮ ನೂತನ ಪ್ರಪಂಚದ ಸುದ್ದಿಗಳ ಹಾವಲಿ. ಕ್ರಮೊಯೋಗವೆಂದರೆ ಫಲ ದಲ್ಲಿ ಇಚ್ಛೆ ಬೇಡ ಎಂದೇ ಹೊರತು ಜೀವನದಲ್ಲಿ ಗುರಿ ಬೇಡ ಎಂದಲ್ಲ. ಆ ಗುರಿಯನ್ನು ಸಾಧಿಸಲು ಬೇಕಾದ ವಿಷಯಗಳನ್ನು ಮಾತ್ರ ಹಂಸ ಕ್ಷೀರ ನ್ಯಾಯದಂತೆ ವೆèಏಕರಿಸುವುದು ನಮ್ಮ ಈ ಪೀಳಿಗೆಯ ವಿದ್ಯಾರ್ಥಿಗಳಿಗೆ ಅತಿ ಆವಶ್ಯಕ ಇಲ್ಲವಾದರೆ ಈ ಐಟಿ ಯುಗ ನಿಮ್ಮ ತಲೆಗಳನ್ನು ಬೇಡದ ವಿಚಾರಗಳಿಂದ ತುಂಬಿ ನಿಷ್ಪ್ರಯೋಜಕರನ್ನಾಗಿ ಮಾಡುತ್ತದೆ. ಸ್ವಲ್ಪ ಫೇಸ್ ಬುಕ್ ಮತ್ತಿತರ ಸಾಮಾಜಿಕ ಮಾಧ್ಯಮಗಳನ್ನು ತಿಳುವಳಿಕೆ ಹಆಗು ವಿವೇಕದಿಂದ ಉಪಯೋಗಿಸಿ. ಈ ತಿಳುವಳಿಕೆ ನಿಮಗೆ ಪ್ರತಿದಿನ ನೀವು ಮಾಡುವ ಸುದರ್ಶನ ಕ್ರಿಯಾ ಹಾಗು ಯೊಗ ದಿಂದ ಮಾತ್ರ ಸಾಧ್ಯ
No comments:
Post a Comment